ಅಭ್ಯಾಸ
I. ಪದಗಳ ಅರ್ಥ ತಿಳಿಯಿರಿ.
ಕಿರುಚು – ಚೀರು: ಒದುರು, ಕೂಗು
ತೆಪ್ಪಗಾಗು – ಸುಮ್ಮನಾಗು
ಬಾನು – ಪಕಾಶ; ಗಗನ
ಸಂಗ – ಗೆಳತನ, ಸ್ನೇಹ
ಹಕ್ಕಿ – ಆರಿಸಿ; ಹುಡುಕಿ
ಕೊಳ – ಸರೋವರ
ಪಡೆ – ಪ್ರಾಯಕ್ಕೆ ಬಂದವರು; ತರುಣರು
ಬೆಪ್ಪ – ದಡ್ಡ, ಮೂರ್ಖ
ಹಂಸ – ಒಂದು ಜಾತಿಯ ಪಕ್ಷಿ
II. ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ:
1. ಕೊಳದಲ್ಲಿನ ಆಮೆಗೆ ಯಾವ ಆಸೆ ಮೂಡಿತು?
ಉತ್ತರ :
ಕೊಳದಲ್ಲಿನ ಆಮೆಗೆ ಹಕ್ಕಿಯಂತೆ ಬಾನಿನಲ್ಲಿ ಹಾರಬೇಕೆಂಬ ಆಸೆ ಮೂಡಿತು.
2. ಆಮೆ ಹಂಸಗಳ ಸಂಗವನ್ನು ಏಕೆ ಬೆಳೆಸಿತು?
ಉತ್ತರ :
ಹಕ್ಕಿಯಂತೆ ಬಾನಲ್ಲಿ ಹಾರಲು ಆಮೆ ಹಂಸಗಳ ಸಂಗವನ್ನು ಬೆಳೆಸಿತು.
3. ಬಾನಿನಲ್ಲಿ ಸಾಗಿದ ಆಮೆಗೆ ಏಕೆ ಸಿಟ್ಟು ಬಂತು?
ಉತ್ತರ : ಬಯಲಿನಲ್ಲಿದ್ದ ಪಡ್ಡೆ ಹುಡುಗರು ಆಮೆಯನ್ನು ಕಂಡು ಕಲ್ಲು ಹಾರುತಿದೆ, ಆಮೆ ಕೆಳಗೆ ಬೀಳಬೇಕು ಎಂದು ಕಿರಿಚಿದ್ದನ್ನು ಕೇಳಿ ಆಮೆಗೆ ಸಿಟ್ಟು ಬಂದಿತು.
4. ಆಮೆ ಪಡೆ ಹುಡುಗರಿಗೆ ಏನೆಂದು ಬೈದಿತು?
ಉತ್ತರ:
ಹೊಟ್ಟೆ ಕಿಚ್ಚನ್ನು ಯಾವಾಗ ನೀವು ಬಿಡುವಿರೆಂದು ಆಮ ವಡ ಹುಡುಗರಿಗೆ ಬೈದಿತು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಬರೆಯಿರಿ :
1. ಹಂಸಗಳು ಆಮೆಯನ್ನು ಬಾನಲ್ಲಿ ಒಯ್ಯಲು ಮಾಡಿದ ಉಪಾಯವೇನು?
ಹಂಸಗಳು ಉದ್ದವಾದ ಕೋಲನ್ನು ತಂದು, ಆಮೆಯನ್ನು ಮಧ್ಯದಲ್ಲಿ ಕಚ್ಚಿ ಕೋಲನ್ನು ಹಿಡಿದುಕೊಳ್ಳಲು ಹೇಳಿದವು. ಎರಡು ಹಂಸಗಳು ಒಂದೊಂದು ತುದಿಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಲು ತೊಡಗಿತು.
2. ಬಾನಿನಲ್ಲಿ ಸಾಗಿದ ಆಮೆಗೆ ಯಾವ ಅನುಭವಗಳಾದವು?
ಉತ್ತರ :
ಬಾವಿನಲ್ಲಿ ಸಾಗಿದ ಆಮೆಗೆ ಮನದಲ್ಲಿ ಹರುಷ ಮೂಡಿತು.
ತಂಪಾದ ಗಾಳಿ, ಸಾಗುವ ಮೋಡ ಕಂಡು ಸಂತೋಷ ಹೊಂದಿತು. ಬಹಳ ಸಮೀಪದಿಂದ ಸೂರ್ಯನನ್ನು ನೋಡಿದ ಅನುಭವಗಳನ್ನು ಹೊಂದಿತು.
3. ಆಮೆಯು ಪಡ್ಡೆ ಹುಡುಗರನ್ನು ಹೇಗೆ ಬೆಪ್ಪು ಮಾಡಿತು?
ಉತ್ತರ :
ಆಮೆ ಕೆಳಗೆ ಬೀಳಲೆಂದು ಪಡೆ ಹುಡುಗರು ಕಲ್ಲು ಹಾರುತಿದೆ ನೋಡಿ ಎಂದು ಜರಿದರು. ಅಗ ಆಮ ನೀವಲ್ಲ ಹೊಟ್ಟೆಕಿಚ್ಚು ಯಾವಾಗ ಬಿಡುವಿರಿ ಎಂದು ಬೈಯ್ಯತೊಡಗಿತು. ಆಮಯ ಈ ಮಾತುಗಳನ್ನು ಕೇಳಿ ಹುಡುಗರೆಲ್ಲ ಬೆಪ್ಪಾದರು.
ಇ) ಇಟ್ಟ ಸ್ಥಳ ತುಂಬಿ ಬರೆಯಿರಿ :
1. ಆಮಯು ____________ ಸಂಗ ಬೆಳಸಿತು.
2. ಬಾನಿನಲ್ಲಿ ಸಾಗಿದ ಆಮೆಯು ಸನಿಹದಿಂದ ___________ ಕಂಡನ೦ದಿತು.
3. ವಡೆ ಹುಡುಗರು ___________ ಬೀಳ ಬೇಕು
ಎಂದುಕೊಂಡರು.
4. ಆಮಯು ಪಡೆ ಹುಡುಗರಿಗೆ ನೀವು ____________ ಎಂದು ಬಿಡುವಿರಿ ಎಂದಿತು.
ಉತ್ತರಗಳು :
1) ಹಂಸಗಳ
2) ಸೂರ್ಯನನ್ನು
3) ಆಮೆ ಕಳಗೆ
4) ಹೊಟ್ಟೆ ಕಿಚ್ಚನು
III. ಭಾಷಾಭ್ಯಾಸ
ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
1. ಬಾನಲೊಮ್ಮ = ಬಾನಲಿ + ಒಮ್ಮ
2. ಆಮೆಗೊಂದು = ಆಮೆಗೆ + ಒಂದು
3. ಬಯಕೆಯನ್ನು + ಬಯಕ + ಅನ್ನು
4. ಹಂಸವೆರದು = ಹಂಸ + ಎರಡು
5. ಹಾರಲೆಂದಿತು = ಹಾರಲು + ಎಂದಿತು
ಆ) ಕಳ ನೀಡಲಾಗಿರುವ ಪದಗಳ ಅರ್ಥ ವ್ಯತ್ಯಾಸ ಬರೆಯಿರಿ.
ಉದಾಹರಣೆ : ಧನ – ಧನ
(ಧನ – ಹಣ ದನ – ಹಸು)
1. ČOV – Kolv
ಕೊಳ -ಸರೋವರ ಕೋಳ – ಬೇಡಿ
2. ಬಾನು – ಭಾನು
ಬಾನು – ಆಕಾಶ
ಭಾನು – ಸೂರ್ಯ
3. ಹಾರು – ಆರು
ಹಾರು – ಜಿಗಿ
ಆರು – ಸಂಖ್ಯೆ
4. ಮಧ್ಯ – ಮದ್ಯ
ಮಧ್ಯ – ನಡುವೆ
ಮದ್ಯ – ಮದ್ಯಪಾನ
5. ಮತ್ತೆ – ಮೆತ್ತೆ
ಮತ್ತೆ – ಪುನಃ
ಮತ್ತೆ – ಹಗುರ
6. ಹಕಿ, – ಹಕಿ,
ಹಕ್ಕಿ – ಪಕ್ಷಿ
ಹಕ್ಕಿ – ಆಯ್ತು
ಇ) ಕೆಳಗಿನ ಶಬ್ದಗಳ ಹಿಂದೆ ಅಥವಾ ಮುಂದೆ ಒಂದು ಅಕ್ಷರ ಸೇರಿಸಿ, ಹಾಸ ಪದ ರಚಿಸಿರಿ.
ಮಾದರಿ : ಸಂಗ (ಪುಸಂಗ)
1. ಆಹಾರ
2. ದಮನ
3. ಸಾಗರ
4. ಕೊಳವ
ಈ ‘ಜಾಣ ಅಮೆ’ ಪದ್ಯದಲ್ಲಿನ ಪ್ರಾಥಪದಗಳನ್ನು ಪಟ್ಟಿ ಮಾಡಿಲಿ.
ಉದಾ : ಮೂಡಿತು – ಬೆಳೆಸಿತು.
1. ಬಂದವು – ತಂದವು
2. ಹಾರತೊಡಗಿತು – ಸಾಗತೊಡಗಿತು.
3. ಕಂಡರು – ಕೊಂಡರು
4. ಬೆಪ್ಪಾದರು – ತಪ್ಪಗಾದರು
5. ಎಂದಿತು – ಅಂದಿತು
ಪಾಠ ಪ್ರವೇಶ :
ಮಕ್ಕಳೇ, ಕೆಲವರು ನಮ್ಮ ಚಲನ ವಲನ ಗಮನಿಸಿ ಅಪಹಾಸ್ಯ ಮಾಡುವುದುಂಟು. ಅಂತಹ ಸನ್ನಿವೇಶದಲ್ಲಿ ಬೇಸರಗೊಳ್ಳುವುದು ಇಲ್ಲವೇ ಕೋವಗೊಳ್ಳುವುದು ದುರ್ಬಲ ಮನಸ್ಸಿನ ಸಂಕೇತ. ನಮ್ಮನ್ನು ಗೇಲಿ ಮಾಡಿದವರ ಮೇಲೆ ಕೋಪಗೊಳ್ಳದ ಜಾಣತನದಿಂದ ತಾಳ್ಮೆಯಿಂದ ವರ್ತಿಸಬೇಕು. ಗೇಲಿ ಮಾಡಿದವರು ನಮ್ಮ ತಪ್ಪನ್ನು ತಾನೇ ಅರಿಯುವಂತೆ ಮಾಡಬೇಕು. ಇಲ್ಲಿ ಜಾಣ ಆಮೆಯೊಂದು ಪಡೆ ಹುಡುಗರನ್ನು ಹೇಗೆ ತಪ್ಪಗಾಗಿಸಿತು ಎಂಬುದನ್ನು ತಿಳಿಯೋಣ.
ಸಾರಾಂಶ :
ಇದೊಂದು ಕಥನ, ಕವನ ಎಂದರೆ ಕವನ ಗಳಲ್ಲಿ ಕಥೆಯನ್ನು ಹೇಳುವ ನಿರೂಪಣಾ ತಂತ್ರ, ಚಿಕ್ಕದಾಗಿ ಚೊಕ್ಕವಾಗಿ ವಿಷಯ ನಿರ ಪಠಣ ೦ಾಗಿದೆ. ಸಮಸ್ಯೆಗಳು ಹೇಳಿ ಕೇಳಿ ಬರುವುದಿಲ್ಲ, ಬಂದಾಗ ಅದನ್ನು ಸವರು ಸೂರ್ತಿಯಿಂದ ಹೇಗೆ ಎದುರಿಸಬಹುದು ಮತ್ತು ಅಪಾಯದಲ್ಲೂ ಉಪಾಯ ದಿಂದ ಪಾರಾಗಬಹುದು. ಎಂಬ ವಿಷಯ ನಿರೂಪಿತವಾಗಿದೆ. ಕಥೆ ಎಂದರೆ ಮಕ್ಕಳಿಗೆ ಇನ್ನೂ. ಅದರಲ್ಲೂ ಪ್ರಾಣಿಗಳ ಕಥೆಯನ್ನು ಬಹಳಮ್ಮ ಇಷ್ಟ ಪಡುವ ಮಕ್ಕಳಿಗೆ ತಿಳಿಯದಂತೆಯೇ ನೀತಿ ಭೋದಿಸಲಾಗಿದೆ. ಕಥೆ ಬಹಳ ಸರಳವಾದದ್ದು. ಜೀವಿಗಳಿಗೆ ತಮ್ಮಲ್ಲಿಲ್ಲದ ವಸ್ತು, ವಿಷಯದ ಬಗ್ಗೆ ಮೋಹ ಜಾಸ್ತಿ, ಅದನ್ನು ಒಮ್ಮೆಯಾದರೂ ಪಡೆಯಬೇಕೆಂಬ ತುಡಿತವಿರುತ್ತದೆ.
ಕೂಳದಲ್ಲಿ ವಾಸವಾಗಿದ್ದ ಆಮಗೆ ಹಕ್ಕಿಯಂತ ಹಾರಬೇಕೆಂಬ ಚಪಲ, ಹಂಸಗಳ ಸ್ನೇಹ ಬೆಳೆಸಿ
ತನ್ನಾಸೆಯಂತೆ ಕೋಲಿನ ಮಧ್ಯ ಬಾಯಲ್ಲಿ ಕಚ್ಚಿಕೊಂಡಿರುತ್ತದೆ. ಆ ತುದಿ ಈ ತುದಿಗಳನ್ನು ಹಿಡಿದು ಹಂಸಗಳು ಹಾರುತ್ತಿದ್ದಾಗ ಆಮಗೆ ಅತೀವ ಸಂತೋಷವಾಗುತ್ತದೆ. ತಂಪಾದ ಗಾಳಿ, ಮೋಡ ಹಾಗೂ ಸೂರ್ಯನನ್ನು ಸಮೀಪದಿಂದ ನೋಡಿ ಆನಂದ ಪಡುತ್ತಿರುತ್ತದೆ. ಬಯಲಿನಲ್ಲಿದ್ದ ಯುವಕರು, ಹುಡುಗರು ಆಮೆ ಹಾರುತ್ತಿರುವ ಅಪೂರ್ವವಾದ ದೃಶ್ಯವನ್ನು ಕಂಡು ಕೀಟಲೆ ಮಾಡಿ ಆಮೆಯನ್ನು ರೇಗಿಸುತ್ತಾರೆ. ಕಲ್ಲು ಹಾರುತ್ತಿದೆ ಎಂಬ ಮಾತು ಕೇಳಿ ಸಿಟ್ಟು ಬಂದು ಆಮೆ ಬೈಯ್ಯಲಾರಂಭಿಸುತ್ತದೆ. ಎಷ್ಟೋ ಸಿಟ್ಟು ಬಂದರು, ವಿವೇಕಯುತವಾಗಿ ಬಾಯಲ್ಲಿದ್ದ ಕೋಲನ್ನು ಕೈಯಲ್ಲಿ ಹಿಡಿದು ನಿಮಗೆ ಹೊಟ್ಟೆಕಿಚ್ಚು, ಇದನ್ನು ಯಾವಾಗ ಬಿಡುತ್ತೀರಿ, ಟಾಟಾ ಎಂದು ಹೀಯಾಳಿಸುತ್ತದೆ. ಇದನ್ನು ಕೇಳಿದ ಪಡ್ಡೆ ಹುಡುಗರು ಬೆರಾಗಿ ತೆಪ್ಪಗಾಗುತ್ತಾರೆ. ಈ ಘಟನೆಯಿಂದ ಕಲಿಯಬೇಕಾದ ಅಂಶಗಳು ಸಾಕಷ್ಟಿವೆ. ಅಸಹಜವಾದುದನ್ನು ಆಸೆವಡಬಾರದು. ಆಸೆಪಟ್ಟರೂ ಅದು ಈಡೇರುವಾಗ ಇತರರ ಅಸೂಯೆಯ ಮಾತಿಗೆ ಕಿವಿಗೊಡಬಾರದು. ಕೋಪ ಮಾಡಿಕೊಳ್ಳಬಾರದು. ಕೋಪ ಮಾಡಿಕೊಂಡರೂ
ವಿವೇಕವಂತರಾಗಿ ವರ್ತಿಸಬೇಕು, ಯಾರನ್ನೂ ಹೀಯಾಳಿಸಬಾರದು. ಹೀಯಾಳಿಕೆಗೆ ಸಂದಿಸದಿದ್ದರೆ
ನಾವೇ ಮೂರ್ಖರಾಗುತ್ತೇವೆ. ವಿದ್ಯಾರ್ಥಿಗಳು ಈ ಪದ್ಯದಿಂದ ಮೇಲಿನ ಅಂಶಗಳನ್ನು ಮನನ ಮಾಡಿಕೊಳ್ಳಬೇಕು.
ಕೃತಿಕಾರರ ಪರಿಚಯ:
ಭಾಸ್ಕರ ನೆಲ್ಯಾಡಿ ಅವರು 1974ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು | ನೆಲ್ಯಾಡಿ ಗ್ರಾಮದಲ್ಲಿ ಜನಿಸಿದರು. ಇವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆಳ್ವಾಸ್ ಶಿಕ್ಷಕರ ತರಬೇತಿ ಸಂಸ್ಕೃ ಮೂಡುಬಿದರೆ ಇಲ್ಲಿ ಚಿತ್ರಕಲಾ ಪಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. “ಮಕ್ಕಳ ಕ್ರಿಯಾಶೀಲ ಚಿತ್ರಕಲೆ’ಗಾಗಿ 2006ರಲ್ಲಿ ಪುತ್ತೂರು ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ದೊರಕಿದೆ. ‘ಜಾಣ ಆಮೆ’ ಇದು ಅವರ ‘ಚಿಣ್ಣರ ಕಣ್ಣು’ ಅವುಕಟಿತ ಕವನ ಸಂಗ್ರಹದಿಂದ ಆರಿಸಲಾಗಿದೆ.